ವಾಮಂಜೂರಿನ ಅನುದಾನಿತ ಸೈಂಟ್‍ ರೇಮಂಡ್ಸ್ ಪ್ರೌಢ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಅಂಗವಾಗಿ ರಾಜ್ಯೋತ್ಸವ ಸಂಭ್ರಮ 2017 ಎಂಬ ವಿಶೇಷ ಕಾರ್ಯಕ್ರಮ ಸಂಪನ್ನಗೊಂಡಿತು.ಶಾಲಾ ಸಾಹಿತ್ಯ ಮತ್ತು ಲಲಿತಕಲಾ ಸಂಘದವರು ಸಾದರ ಪಡಿಸಿದ ಕಾರ್ಯಕ್ರಮದಲ್ಲಿ ಮೂರು ವಿಭಿನ್ನ ಕೃತಿಗಳು ಅನಾವರಣಗೊಂಡವು.ಶಿಕ್ಷಕ ಶ್ರೀ.ರಿಚರ್ಡ್‍ ಅಲ್ವಾರಿಸ್ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿರುವ ಶಾಲಾ ಮಾಸಿಕ ಸಂಚಿಕೆ ಸುದ್ಧಿ ಸಿಂಧು ಈ ಬಾರಿಕನ್ನಡರಾಜ್ಯೋೀತ್ಸವ ವಿಶೇಷಾಂಕವಾಗಿ ರೂಪುಗೊಂಡು ಶಿಕ್ಷಕಿ ಸಿ| ಟ್ರೆಶ್ಶಿಯಾನ್ ಅವರಿಂದ ಬಿಡುಗಡೆಗೊಂಡಿತು. ಶಿಕ್ಷಕ ರಾಂ ಎಲ್ಲಂಗಳ ಅವರು ಬರೆದ ಮಕ್ಕಳ ನಾಟಕ ಗುಚ್ಛ ‘ಅಮೃತ ವೃಕ್ಷ’ವನ್ನು ಮುಖ್ಯಅತಿಥಿ ಬೆಥನಿ ವಿದ್ಯಾ ಸಂಸ್ಥೆಯಮಂಗಳೂರು ಪ್ರಾಂತ್ಯದಕಾರ್ಯದರ್ಶಿ ಸಿ| ಮಾರಿಯೋಲಾಅವರು ಬಿಡುಗಡೆಗೊಳಿಸಿದರು.ಬಳಿಕ ಕೃತಿ ಹಾಗೂ ಕೃತಿಗಾರನ ಪರಿಚಯ ಮಾಡಿ ಶುಭಕೋರಿದರು.ಸಮಾರಂಭದಅಧ್ಯಕ್ಷತೆವಹಿಸಿದ್ದ ಮುಖ್ಯೋಪಾಧ್ಯಾಯಿನಿ, ಸಿ| ರೋಶನಿ ಶಾಲಾ ಸಾಹಿತ್ಯ ಮತ್ತು ಲಲಿತ ಕಲಾ ಸಂಘದ ವಾರ್ಷಿಕ ಸಂಚಿಕೆ‘ಚಿಗುರು’ ಬಿಡುಗಡೆಗೊಳಿಸಿ ಮಾತನಾಡಿರಾಜ್ಯೋತ್ಸವ ಸಂದೇಶ ನೀಡಿದರು.ಸಂಚಿಕೆಯ ಸಂಪಾದಕಿಅನ್ಸಿಲ್ಲಾಚಿಗುರು ಬಗ್ಗೆ ಮಾತನಾಡಿದರು.ಸಂಘದಅಧ್ಯಕ್ಷೆ ತೇಜಸ್ವಿನಿ ಸ್ವಾಗತಿಸಿದರು.ಕಾರ್ಯದರ್ಶಿ ಪ್ರಜ್ಞಾ ವಂದನಾರ್ಪಣೆ ಮಾಡಿದರು.ಶಿಕ್ಷಕ ರಾಂ ಎಲ್ಲಂಗಳ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಅಂಗವಾಗಿ ಸಮೂಹ ಗೀತೆ ಹಾಗೂ ಕನ್ನಡ ನಾಡು ನುಡಿಕುರಿತಗೀತರೂಪಕ ಪ್ರಸ್ತುತ ಪಡಿಸಲಾಯಿತು.

Comments powered by CComment

Contact Us

Bethany Provincialate
Vamanjoor, Mangalore, 575028
Karnataka, India.

Email : This email address is being protected from spambots. You need JavaScript enabled to view it. 

Phone : 0824 2262105