ವಾಮಂಜೂರಿನ ಅನುದಾನಿತ ಸೈಂಟ್ ರೇಮಂಡ್ಸ್ ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟವು ನವೆಂಬರ್ 23 ರಂದುಜರಗಿತು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕದ್ರಿಶಿವಭಾಗ್ ಶಾಖೆ ಇಲ್ಲಿಯಹಿರಿಯ ಪ್ರಬಂಧಕ ಶ್ರೀ ಡೆರಿಕ್ ಸಿಕ್ವೇರಾ ಮುಖ್ಯ ಅತಿಥಿಗಳಾಗಿದ್ದು ಪಥಸಂಚಲನದಲ್ಲಿಗೌರವ ವಂದನೆ ಸ್ವೀಕರಿಸಿ ಧ್ವಜಾರೋಹಣ ನಿರ್ವಹಿಸಿ ಮಕ್ಕಳನ್ನುದ್ದೇಶಿಸಿ ಮಾತನಾಡಿದರು.ಶಾಲಾ ಸಂಚಾಲಕಿ ಸಿ.ಸಿಬಿಲ್ ಸಮಾರಂಭದಅಧ್ಯಕ್ಷತೆ ವಹಿಸಿ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿ ಕ್ರೀಡಾಪಟುಗಳಿಗೆ ಶುಭಕೋರಿದರು.ಈ ಸಂದರ್ಭದಲ್ಲಿರಾಜ್ಯಮಟ್ಟದ ನೆಟ್ಬಾಲ್ ಪಂದ್ಯಾಟದಲ್ಲಿತೃತೀಯ ಸ್ಥಾನ ಪಡೆದದಕ್ಷಿಣಕನ್ನಡಜಿಲ್ಲಾತಂಡದ ಸದಸ್ಯ ಈ ಶಾಲಾ ವಿದ್ಯಾರ್ಥಿ 8ನೇ ತರಗತಿಯಕೆವಿನ್ ಪಿರೇರಾರನ್ನುಅಧ್ಯಕ್ಷರು ಗೌರವಿಸಿದರು.ಕ್ರೀಡಾಕೂಟಕ್ಕೆದಾನ ನೀಡಿದ ವಿದ್ಯಾಥಿಗಳನ್ನೂ ಗೌರವಿಸಲಾಯಿತು.ತಿರುವೈಲ್ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ರೂಪಲತಾ, ಶಾಲಾ ರಕ್ಷಕ ಶಿಕ್ಷಕ ಸಂಘದಉಪಾಧ್ಯಕ್ಷೆ ಶ್ರೀಮತಿ ಮಾರ್ಗರೆಟ್ ಡಿ’ ಸೋಜಾಮತ್ತುಕಾರ್ಯಕಾರಿ ಸಮಿತಿಯ ಸದಸ್ಯರು, ಸೈಂಟ್ರೇಮಂಡ್ ಸಹ ಸಂಸ್ಥೆಗಳ ಮುಖ್ಯಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ರೋಶನಿ ಸರ್ವರನ್ನೂ ಸ್ವಾಗತಿಸಿದರು.ಶಿಕ್ಷಕ ರಾಂ ಎಲ್ಲಂಗಳ ಕಾರ್ಯಕ್ರಮ ನಿರೂಪಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಡೊನಾಲ್ಡ್ ಲೋಬೋ ವಂದಿಸಿದರು. ವಿವಿಧಆಟೋಟ ಸ್ಪರ್ಧೆಗಳು ನಡೆದವು.
ವರದಿ: ರಿಚರ್ಡ್ ಅಲ್ವಾರಿಸ್.
Comments powered by CComment